ad
Tuesday 26 January 2021
ಬುರ್ಜ್ ಖಲೀಫಾಗೆ ಹೊರಟ ಬಾದ್ ಶಾ..!!
Friday 22 January 2021
ಬಿಗ್ ಬಾಸ್ ಗೆ ಕಾಲಿಡೋಕೆ ವಿಕ್ರಾಂತ್ ರೋಣ ರೆಡಿ..!!
ಕಿಚ್ಚನಿಗೆ 2000 ಅಡಿ ಕಟೌಟ್ ರೆಡಿ...!!!
Thursday 21 January 2021
ವಿಕ್ರಾಂತ್ ರೋಣ ಬುರ್ಜ್ ಖಲೀಫಾದ ಬಾದ್ ಶಾ ..!!
Wednesday 20 January 2021
ಭಜರಂಗಿಯ ಅಬ್ಬರ ಫೆಬ್ರವರಿಗೆ ಶುರುವಾಗಲಿದೆ..!!
ವಿಕ್ರಾಂತ್ ರೋಣ ಗ್ರ್ಯಾಂಡ್ ಎಂಟ್ರಿ ನಾಳೆಗೆ...!!
Tuesday 19 January 2021
32 ವರ್ಷಗಳ ಇತಿಹಾಸವನ್ನು ಪುಡಿ ಮಾಡಿದ ಟೀಮ್ ಇಂಡಿಯಾ..!!
ಆಸ್ಟ್ರೇಲಿಯಾ ವಿರುದ್ಧದ 4 ಧೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗಾಬಾದಲ್ಲಿ ಗೆಲ್ಲೋ ಮೂಲಕ 32 ವರ್ಷಗಳ ಇತಿಸಾಸವನ್ನು ನುಚ್ಚು ನೂರು ಮಾಡಿ ದಾಖಲೆ ಸೃಷ್ಟಿಸಿದೆ.
1988ರಿಂದ ಆಡಿದ ಯಾವುದೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಇಲ್ಲಿ ಸೋತಿಲ್ಲ , ಇದೇ ಮೊದಲ ಬಾರಿಗೆ ನಮ್ಮ ಭಾರತದ ಎದುರಿನ ಟೆಸ್ಟ್ ಸರಣಿನ್ನು 2-1 ರ ಮೂಲಕ ಸೋತು ಗಾಬಾದ ತನ್ನ ಇತಿಹಾಸವನ್ನು ಕೈ ಚೆಲ್ಲಿತು.
ಹಲವಾರು ಗಾಯದ ಸಮಸ್ಯೆ ಹಾಗೂ ಆಸ್ಟ್ರೇಲಿಯಾ ವೀಕ್ಷಕರ ಕೆಟ್ಟ ಮಾತುಗಳ ನಡುವೆ ಯಾವುದೇ ಹಿರಿಯ ಆಟಗಾರರು ತಂಡದಲ್ಲಿದ್ದದಿದ್ದರೂ ಯುವ ಭಾರತ ತಂಡ ತಮ್ಮ ದೇಶದ ಅಭಿಮಾನವನ್ನು ಮನದಲ್ಲಿಟ್ಟುಕೊಂಡು ಎಲ್ಲವನ್ನೂ ಮೀರಿ ಈ ಐತಿಹಾಸಿಕ ಜಯವನ್ನು ತಮ್ಮದಾಗಿಸಿಕೊಂಡಿದೆ.
ಸಿರಾಜ್ ಬೌಲಿಂಗ್ ನಲ್ಲಿ ಮಿಂಚಿದರೆ, ಬ್ಯಾಟಿಂಗ್ ನಲ್ಲಿ ಶುಭಮಾನ್ ಗಿಲ್, ಚೇತೇಶ್ವರ್ ಪೂಜಾರ , ಹಾಗೂ ರಿಶಭ್ ಪಂತ್ ತಮ್ಮ ಕೈಚಳಕವನ್ನು ತೋರಿಸಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.
ಈ ಐತಿಹಾಸಿಕ ಗೆಲುವನ್ನು ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಎಲ್ಲಾ ಗಣ್ಯರು ಸಂಭ್ರಮದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯಗಳನ್ನು ತಿಳಿಸಿದರು
Monday 18 January 2021
ರಾಜಕುಮಾರ ಕೇವಲ ಸಿನಿಮಾ ಅಲ್ಲ...??!!
ಫ್ಯಾಂಟಮ್ Update ಇದೇ ಜನವರಿ 21 ಕ್ಕೆ...??
Sunday 17 January 2021
ಕಿಚ್ಚನ ಕನ್ನಡದ ಕಂಪು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ..!!!
ಕಿಚ್ಚ ಸುದೀಪ್ ಎಂದರೆ ಕನ್ನಡದ ಅಸ್ಮಿತೆ. ಕನ್ನಡದ ಆಸ್ತಿ ಎಂದರೆ ತಪ್ಪಾಗಲಾರದು.
ಅವರು ಎಲ್ಲೇ ಹೋಗಲಿ ಕನ್ನಡ ಹಾಗೂ ಕನ್ನಡ ಸಂಸ್ಕೃತಿಯ ಬಾವುಟವನ್ನು ತಾವು ಹೋಗುವ ಸ್ಥಳಗಳಲ್ಲಿ ನೆಟ್ಟು ಕನ್ನಡಕ್ಕಾಗಿ ಪ್ರೀತಿ ಹಾಗೂ ಗೌರವಗಳನ್ನು ಸಂಪಾದಿಸಿಕೊಂಡು ಬರುತ್ತಾರೆ ಇದು ಅವರನ್ನು ಮೆಚ್ಚಲೇಬೇಕು ಎನ್ನುವಂತೆ ಮಾಡುತ್ತೆ.
51 ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಮುಖ್ಯ ಅತಿಥಿಯಾಗಿ ಹೋದ ಕಿಚ್ಚ ಸುದೀಪ್ ಭಾಷಣ ಮಾಡೋ ಸಂದರ್ಭದಲ್ಲಿ ಮೊದಲು ಕನ್ನಡದಲ್ಲಿ ಪ್ರಾರಂಭಿಸಿ ಕನ್ನಡತನವನ್ನು ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೂಡ ಪಸರಿಸಿ ಎಲ್ಲಾ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಉಪಸ್ಥಿತರಿದ್ದರು.
ಫ್ಯಾಂಟಮ್ ಚಿತ್ರ ಈಗಾಗಲೇ ಬಹುಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡ ಚಿತ್ರರಂಗದ ಹೆಗ್ಗುರುತಾಗಿ ರಾಷ್ಟ್ರಾದ್ಯಂತ ಸಂಚರಿಸಲು ಇನ್ನೇನು ಸಜ್ಜಾಗಿದೆ.
ಕಿಚ್ಚ ಸುದೀಪ್ ರವರ ಕನ್ನಡ ಪ್ರೇಮದಿಂದಾಗೀನೆ ಇಂದು ಅವರು ಎಲ್ಲೇ ಹೋಗಲಿ ಕನ್ನಡದ ಅರಿವನ್ನು ಹಾಗೂ ಕನ್ನಡ ಸಂಸ್ಕೃತಿಯನ್ನು ಪರಭಾಷಿಗರಿಗೆ ಪರಿಚಯಿಸಿ ಕನ್ನಡದ ಬಗೆಗಿನ ಪರಿಚಯವನ್ನು ದೇಶಾದ್ಯಂತ ವಿಸ್ತಾರವಾಗಿ ಹರಡಿದ್ದಾರೆ.
ನೀವು ಪರಭಾಷಿಗರಿಗೆ ಕನ್ನಡ ಅಥವಾ ಕರ್ನಾಟಕದ ಬಗ್ಗೆ ಕೇಳಿದಾಗ ಮೊದಲು ಅವರು ಹೇಳುವ ಹೆಸರು ಕಿಚ್ಚ ಎಂದೇ.
ಅದು ಕಿಚ್ಚ ಸುದೀಪ್ ರವರು ಸಂಪಾದಿಸಿರುವ ಪ್ರೀತಿ ಗೌರವ.
ತಾವು ಬೆಳೆಯೋದರ ಜೊತೆಗೆ ಕನ್ನಡದ ಕೀರ್ತಿಯನ್ನು ಸಹ ಕಿಚ್ಚ ಸುದೀಪ್ ಉಚ್ಚ ಶ್ರೇಣಿಗೆ ಕರೆದೊಯ್ಯುತ್ತಿದ್ದಾರೆ.
Saturday 16 January 2021
ಬೈಕ್ ಅಲ್ಲಿ ಸೈಡ್ ಮಿರರ್ ಇಲ್ಲಾಂದ್ರೆ , ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸಿಲ್ಲ ಅಂದ್ರೆ ಬೀಳತ್ತೆ ದಂಡ
ದೆಹಲಿ : ಸಂಚಾರಿ ನಿಯಮ ಪಾಲನೆ ಮಾಡದವರಿಗೆ ಸರ್ಕಾರ ಈಗಾಗಲೇ ದೊಡ್ಡ ಮಟ್ಟದ ದಂಡ ವಿಧಿಸುತ್ತಿದೆ. ಬೈಕ್ನಲ್ಲಿ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಮುಂದೆ ಕೂರುವವರು ಕಡ್ಡಾಯವಾಗಿ ಸೀಟ್ಬೆಲ್ಟ್ ಧರಿಸಬೇಕು ಹೀಗೆ ಹಲವು ನಿಯಮಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಿಗಿಗೊಳಿಸಲಾಗಿದೆ. ಜನರು ನಿಯಮ ಪಾಲಿಸಬೇಕು ಎನ್ನುವ ಕಾಳಜಿಗಿಂತ ದಂಡ ತೆರಬೇಕು ಎನ್ನುವ ಭಯದಲ್ಲೇ ಒಲ್ಲದ ಮನಸ್ಸಿನಿಂದಾದರೂ ಅವುಗಳಿಗೆ ಒಗ್ಗಿಕೊಂಡಿದ್ದಾರೆ.
ಇದೀಗ ವಾಹನ ಸವಾರರಿಗೆ ಸಂಬಂಧಿಸಿದಂತೆ ಮತ್ತೊಂದು ನಿಯಮ ಜಾರಿಯಾಗಿದೆ. ಈ ನೂತನ ನಿಯಮದ ಅನುಸಾರ ಬೈಕ್ನಲ್ಲಿ ಸೈಡ್ ಮಿರರ್ ಇರದಿದ್ದರೆ ₹500 ಮತ್ತು ಕಾರಿನಲ್ಲಿ ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ₹1000 ದಂಡ ವಿಧಿಸಬಹುದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಿಂದಲೇ ನಿಯಮ ಜಾರಿಯಾಗಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.
ಬೈಕ್ನಲ್ಲಿ ಸೈಡ್ ಮಿರರ್, ಕಾರಿನಲ್ಲಿ ಹಿಂಬದಿ ಸವಾರರಿಗೆ ಸೀಟ್ ಬೆಲ್ಟ್ ಕಡ್ಡಾಯ
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ದೆಹಲಿ ಸಂಚಾರ ಪೊಲೀಸರು, ಬಹುತೇಕ ಬೈಕ್ಗಳಲ್ಲಿ ಸೈಡ್ ಮಿರರ್ ಇರುವುದೇ ಇಲ್ಲ. ಕೆಲವರು ಶೋಕಿಗಾಗಿ ತೆಗೆದಿಡುತ್ತಾರೆ. ಇದರಿಂದ ಅಪಘಾತ ಆಗುವ ಸಂಭವ ಹೆಚ್ಚಿದೆ. ಅಂತೆಯೇ, ಕಾರಿನಲ್ಲಿ ಹಿಂಬದಿ ಕುಳಿತು ಸಂಚರಿಸುವವರು ಸೀಟ್ ಬೆಲ್ಟ್ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇದು ದೊಡ್ಡ ಮಟ್ಟದ ಅಪಘಾತಗಳಲ್ಲಿ ಪ್ರಾಣಕ್ಕೆ ಸಂಚಕಾರ ತಂದೊಡುತ್ತಿದೆ. ಆದ್ದರಿಂದ, ಈ ಕುರಿತು ವಾಹನ ಸವಾರರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಈ ನಿಯಮಗಳು ಹೊಸದಾಗಿ ರೂಪುಗೊಂಡಿರುವುದೇನಲ್ಲ. ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯ್ದೆ 1989 ಎರಡರಲ್ಲೂ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಅವುಗಳ ಪಾಲನೆಯಾಗುತ್ತಿಲ್ಲವಷ್ಟೇ. ಇನ್ನುಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಮತ್ತು ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆಯಿಂದಲೇ ದೆಹಲಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಆರಂಭಿಕ ಹಂತದಲ್ಲಿ ಸೈಡ್ ಮಿರರ್ ಅಳವಡಿಸಿದ ಬೈಕ್ ಸವಾರರಿಗೆ ₹500 ಮತ್ತು ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಕುಳಿತುಕೊಳ್ಳುವ ಹಿಂಬದಿ ಸವಾರರಿಗೆ ₹1000 ದಂಡ ವಿಧಿಸುವುದಾಗಿ ಪ್ರಕಟಣ ಹೊರಡಿಸಿದ್ದಾರೆ.
ಕಿಚ್ಚ ಕನ್ನಡ ಹೆಮ್ಮೆ ಅಂತ ಮತ್ತೆ ಸಾಬೀತಾಗಿದೆ..!!
ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ದೇಶದ ಯಾವುದೇ ಭಾಷೆಯಲ್ಲೂ ಕೂಡ ಅಲ್ಲಿನ ನಟರೂ ಕೂಡ ನಾಚುವಂತೆ ನಟಿಸೋ ನ್ಯಾಚುರಲ್ ಹಾಗೂ ವರ್ಸಟೈಲ್ ನಟ.
ಕನ್ನಡ ಚಿತ್ರರಂಗದ ಬಾವುಟವನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ಕೂಡ ಗೌರವಯುತ ಸ್ಥಾನದಲ್ಲಿ ನೆಟ್ಟಂತಹ ನಟ . ಇವರ ನಟನೆಯನ್ನು ಲೆಜೆಂಡ್ ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಹಾಗೂ ಕಮಲ್ ಹಾಸನ್ ರವರೇ ಮೆಚ್ಚಿದ್ದರು.
ಆಂದ್ರಪ್ರದೇಶದ ನಟನೆಗೆ ಸನ್ಮಾನಿಸುವ ಉಚ್ಛ ಪ್ರಶಸ್ತಿಯಾದ ನಂದಿ ಅವಾರ್ಡ್ ನ್ನು ನೀಡಿ ಸನ್ಮಾನಿಸಿದ್ದರು. ಟೊರೆಂಟೋ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ , ಹೀಗೆ ಲೆಕ್ಕ ಹಾಕ್ತಾ ಹೋದ್ರೆ ಅವಾರ್ಡ್ ಗಳ ಲಿಸ್ಟ್ ಮುಂದೆ ಹೋಗ್ತಾನೇ ಇರುತ್ತೆ.
ಕಿಚ್ಚ ಅವಾರ್ಡ್ ಗಳಿಂದ ದೂರ ಹೋದರೂ , ಅವಾರ್ಡ್ ಗಳು ಕಿಚ್ಚ ಸುದೀಪ್ ರವರನ್ನು ಹುಡುಕಿಕೊಂಡು ಬರುತ್ತಿದ್ದವು.
ಈಗ ಕಿಚ್ಚ ಸುದೀಪ್ ರವರು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡೋವಂತಹ ಇನ್ನೊಂದು ಕೆಲಸ ಮಾಡಿದ್ದಾರೆ.
ಇಂದಿನಿಂದ ಗೋವಾದಲ್ಲಿ ನಡೆಯಲಿರುವ 51 ನೇ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಆಮಂತ್ರಿತಗೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಗೌರವವನ್ನು ಸ್ವೀಕರಿಸಿದ ಮೊದಲ ಕನ್ನಡ ನಟನಾಗಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಅದಕ್ಕೆ ಅನ್ಸತ್ತೆ ಹೇಳೋದು ಕಿಚ್ಚ ಸುದೀಪ್ ರವರು ಯಾವುದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲಿ ಅಲ್ಲಿಂದ ಪ್ರೀತಿ ಹಾಗೂ ಅಲ್ಲಿ ಕನ್ನಡದ ಕುರಿತಂತೆ ಗೌರವವನ್ನು ಬಿತ್ತಿ ಬರುತ್ತಾರೆ .
Friday 15 January 2021
ಹೆಬ್ಬುಲಿ ಕ್ರೇಜ್ Never Before Never Again 😍😍😍
ಹೆಬ್ಬುಲಿ, ಈ ಫಿಲ್ಮ್ ಹೆಸರು ಕೇಳಿದ್ರೇನೆ ಒಂದ್ಸಲ ಮೈ ಜುಮ್ ಅಂದೇ ಅನ್ಸುತ್ತೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆರ್ಮಿ ಆಫಿಸರ್ ಆಗಿ ನಟಿಸಿದ್ದ ಈ ಚಿತ್ರ ಅಭಿಮಾನಿಗಳಲ್ಲಿ ಇಂದಿಗೂ ವಿಶೇಷ ಸ್ಥಾನದಲ್ಲಿ ಇದೆ.
ಹೆಬ್ಬುಲಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿದಷ್ಟು ಹವಾ ಯಾವ ಸಿನಿಮಾವೂ ಎಬ್ಬಿಸಿಲ್ಲ.
ಮೊದಲಿಗೆ ಕಿಚ್ಚ ಸುದೀಪ್ ರವರ ಹೇರ್ ಸ್ಟೈಲ್ ಫಸ್ಟ್ ಲುಕ್ ಬಿಡುಗಡೆ ಆಗುತ್ತಿದ್ದಂತೆ ಹರೀ ಫ್ಯಾನ್ಸ್ ಅಲ್ಲಾ ಎಲ್ಲರೂ ಈ ಹೇರ್ ಸ್ಟೈಲ್ ನ್ನು ಮಾಡಿಸಿಕೊಂಡರು.
ಸುದೀಪ್ ರವರ ಈ ಸ್ಟೈಲ್ ಕೇವಲ ಇಲ್ಲಿ ಮಾತ್ರವಲ್ಲ ಜಪಾನ್ ಚೀನಾದಲ್ಲಿ ಕೂಡ ಅಭಿಮಾನಿಗಳಿಂದ ಮೆಚ್ಚಲ್ಪಟ್ಟಿತ್ತು.
ಇನ್ನು ಹೆಬ್ಬುಲಿ ಚಿತ್ರ IMDB ಯಲ್ಲಿ ಟ್ರೆಂಡ್ ಗೆ ಬಂದ ಮೊದಲ ಚಿತ್ರವಾಗಿ ಮೂಡಿಬಂದಿತು ಮಾತ್ರವಲ್ಲದೇ 40 ಕ್ಕೂ ಅಧಿಕ ದಿನಗಳಿಗೆ ನಾನ್ ಸ್ಟಾಪ್ ನಂಬರ್ 1 ಸ್ಥಾನದಲ್ಲಿ ಟ್ರೆಂಡ್ ಆಗಿ ದಾಖಲೆ ಸೃಷ್ಟಿಸಿತು. ಮಾತ್ರವಲ್ಲದೇ ಆಗ ಫೇಸ್ಬುಕ್ ಟ್ರೆಂಡ್ ನಲ್ಲಿ ಬಂದ ಏಕೈಕ ಕನ್ನಡ ಚಿತ್ರವಾಗಿ ಮೂಡಿಬಂತು.
ಇನ್ನೂ ಕಲೆಕ್ಷನ್ ವಿಚಾರದಲ್ಲೂ ಕಿಚ್ಚನ ಹೆಬ್ಬುಲಿ ಬಾಕ್ಸ್ ಆಫೀಸ್ ನ ಎದೆ ಬಗೆದಿತ್ತು. ಅಂದಿನ ಕಾಲಕ್ಕೆ ಒಂದು ದಿನದಲ್ಲೇ 10 ಲಕ್ಷ ಟಿಕೆಟ್ ನ್ನು ಸೇಲ್ ಮಾಡಿ ಮೊದಲ ದಿನದಲ್ಲಿ 10ಕೋಟಿ ಓಪನಿಂಗ್ ಪಡೆದ ಮೊದಲ ಕನ್ನಡ ಚಿತ್ರವಾಗಿ ಘರ್ಜಿಸಿತ್ತು.
ಈ ಚಿತ್ರದ ಮೇಲೆ ಇಷ್ಟೊಂದು ಕ್ರೇಜ್ ಬರಲು ಮುಖ್ಯ ಕಾರಣ ಬೇರ್ಯಾರು ಅಲ್ಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ . ಅವರು ಯಾವುದೇ ಹೊಸ ಸ್ಟೈಲ್ ಟ್ರೈ ಮಾಡಲಿ ಅವರನ್ನು ಫಾಲೋ ಮಾಡೋ ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಅದು ವೈರಲ್ ಆಗಿದೆ.
ಹೆಬ್ಬುಲಿ ಚಿತ್ರಕ್ಕಿದ್ದ ಕ್ರೇಜ್ ಹೆಂಗಿತ್ತೆಂದರೆ ಹಿಂದೆ ಯಾವ ಚಿತ್ರಕ್ಕೆ ಇದ್ದಿರಲಿಲ್ಲ , ಇನ್ನು ಮುಂದೆ ಯಾವ ಚಿತ್ರಕ್ಕೆ ಬರೋದು ಕೂಡ ಡೌಟ್.
ಸಲಾರ್ ಇಂದಿನಿಂದ ರೆಡಿ ಘರ್ಜಿಸೋಕೆ..!!...
ಅನೌನ್ಸ್ ಆದಾಗಿನಿಂದ ಇಂದಿನವರೆಗೂ ಟ್ರೆಂಡಿಂಗ್ ನಲ್ಲಿದ್ದ ಸಲಾರ್ ಚಿತ್ರದ ಮುಹೂರ್ತ ಪೂಜೆ ಇಂದು ಹೈದರಾಬಾದ್ ನಲ್ಲಿ ನೆರವೇರಿದೆ.
ಈಗಾಗಲೇ ಚಿತ್ರತಂಡದಲ್ಲಿ ಯಾರ್ಯಾರು ಇದ್ದಾರೆಂಬುದು ತಿಳಿದು ಬಂದಿಲ್ಲ. ಆದರೆ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರವನ್ನು ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ.
ಅಲ್ಲದೇ ಮಾಸ್ ಬಿಜಿಎಮ್ ಕಿಂಗ್ ಎಂದೇ ಕರೆಸಿಕೊಳ್ಳುವ ರವಿ ಬಸ್ರೂರು ಚಿತ್ರದ ಸಂಗೀತ ನಿರ್ದೇಶಕರಾಗಿ ಹಾಗೂ ಭುವನ್ ಗೌಡ ಸಿನೆಮಾಟೋಗ್ರಾಫರ್ ಆಗಿ ಚಿತ್ರತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು ಚಿತ್ರದ ಮುಹೂರ್ತ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ್, ಕನ್ನಡದ ಈಗಿನ ಟಾಪ್ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್, ಹಾಗೂ ಇಡೀ ಜಗತ್ತಿಗೆ ಭಾರತೀಯ ಚಿತ್ರರಂಗದ ಗತ್ತನ್ನು ತೋರಿಸಿದ್ದ ನಿರ್ದೇಶಕ ರಾಜಮೌಳಿ ಕೂಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈಗಾಗಲೇ ನೀಲ್ ಹೇಳಿರುವಂತೆ, ನನಗೆ ಪ್ರಭಾಸ್ ರವರ ಇನೋಸೆನ್ಸ್ ಅಂದರೆ ತುಂಬಾ ಇಷ್ಟ.
ಅವರನ್ನು ಸಲಾರ್ ಚಿತ್ರದಲ್ಲಿ ಹಿಂದೆಂದೂ ಕಂಡಿರದಂತಹ ಹೊಸ ಅವತಾರದಲ್ಲಿ ತೋರಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಚಿತ್ರ ಇಡೀ ದೇಶಾದ್ಯಂತ ಸುದ್ಧಿಯಲ್ಲಿದ್ದು, ಚಿತ್ರದ ಅಪ್ಡೇಟ್ ಗಾಗಿ ಅಭಿಮಾನಿಗಳು ಹಾಗೂ ಚಿತ್ರರಸಿಕರು ಕಾಯುತ್ತಿದ್ದಾರೆ.
Thursday 14 January 2021
ಸಂಕ್ರಾಂತಿ ಹಬ್ಬದಂದು ಹರುಷತಂದ ಕಿಚ್ಚ ಸು "ದೀಪ "....!!
ಕಿಚ್ಚ ಸುದೀಪ್ ಅಂದಾಗಲೇ ಅದೊಂದು ಪ್ರೀತಿನ ಹಂಚೋ ವ್ಯಕ್ತಿತ್ವ ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತು.
ಕಷ್ಟದಲ್ಲಿ ಯಾರೇ ಇರಲಿ ಮೊದಲು ಹೋಗಿ ಅವರ ಕಷ್ಟಕ್ಕೆ ಅವರ ಆತ್ಮೀಯನಂತೆ ಸ್ಪಂದಿಸುವ ಚಿನ್ನದಂತಹ ವ್ಯಕ್ತಿತ್ವದಿಂದಲೇ ತಾನೇ ಇಡೀ ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಅಚ್ಚು ಮೆಚ್ಚಾಗಿರೋದು.
ಈಗ ತಮ್ಮ ಚಾರಿಟೇಬಲ್ ಟೃಸ್ಟ್ ನ ಮೂಲಕ ನೊಂದವರ ಹಾಗೂ ನೆರವಿನ ಅಗತ್ಯವಿರುವವರಿಗೆ ಅವರ ಸಮಸ್ಯೆಗಳನ್ನು ಪರಿಹರಿಸೋದರ ಮೂಲಕ ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.
ಮಾಣಿಕ್ಯ ಚಿತ್ರದಲ್ಲಿ ಅವರ ಒಂದು ಡೈಲಾಗ್ " ಪ್ರೀತಿನಾ ಹಂಚಿಕೋ " ಅಂತ ಅದನ್ನು ನಿಜಜೀವನದಲ್ಲಿ ಕೂಡ ಪರಿಪಾಲಿಸೋ ನಟ ಕಿಚ್ಚ ಸುದೀಪ್.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮ್ಮ ಆಪ್ತರಾದ ಕಿರಣ್ ರವರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಉಡುಗೊರೆಯಾಗಿ ನೀಡೋದರ ಮೂಲಕ ಅವರ ಹಬ್ಬದ ದಿನವನ್ನು ಮತ್ತಷ್ಟು ಸಂತೋಷಗೊಳಿಸುವಲ್ಲಿ ಕಾರಣರಾದರು.
ಇದೇ ತರಹ ಅದೆಷ್ಟೋ ಜನರ ಜೀವನದಲ್ಲಿ ಬೆಳಕಾಗಿ ಅವರ ಮುಖದ ನಗುವಾಗಿ ಇರೋದಕ್ಕೆ ತಾನೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು " ಅಭಿಮಾನಿಗಳ ಅಭಿಮಾನಿ " ಅಂತ ಕರೆಯೋದು.
ತಮ್ಮ ಆದಾಯ 40ಕ್ಕೂ ಅಧಿಕ ಭಾಗವನ್ನು ಸಾಮಾಜಿಕ ಸೇವೆಗಳಿಗಾಗಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕನ್ನಡ ಚಿತ್ರರಂಗ ಇಂತಹ ಮನೋಜ್ಞ ನಟನನ್ನು ಹೊಂದಿರುವುದಕ್ಕೆ ಧನ್ಯವಾದರೆ, ಕನ್ನಡ ನಾಡು ಇಂತಹ ಕೊಡುಗೈ ದಾನಿಯನ್ನು ಪಡೆಯಲು ಧನ್ಯವಾಗಿದೆ .
ಇವರ ಈ ವ್ಯಕ್ತಿತ್ವ ಉಳಿದ ನಟರಿಗೂ ಮಾದರಿಯಾಗಲೀ ಎನ್ನುವುದು ನಮ್ಮ ಆಶಯ.
ಬಾರ್ ಲೆಸೆನ್ಸ್ ಪಡೆಯುವುದು ಹೇಗೆ? ಏನೆಲ್ಲಾ ಬೇಕು ನೋಡಿ
ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿದೆ. ಬಾರ್ ಪ್ರಾರಂಭಿಸುವುದು ಒಂದು ಪ್ರಮುಖ ಬಿಸಿನೆಸ್ ಎಂದು ಹೇಳಬಹುದು. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಬೇಕು. ಲೈಸೆನ್ಸ್ ಹೇಗೆ ಪಡೆಯುವುದು, ಅದಕ್ಕೆ ಏನೇನು ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಬಾರ್ ಗಳಲ್ಲಿ ಹಲವು ವಿಧಗಳಿವೆ. ಸಿಎಲ್ 1, ಸಿಎಲ್ 2, 4,5,6a,7,9,11. ಸಿಎಲ್ 1 ಎಂದರೆ ಹೋಲ್ ಸೇಲ್ ಬಾರ್, ಸಿಎಲ್ 2 ಎಂದರೆ ರಿಟೇಲರ್ ಬಾರ್. ಸಿಎಲ್ 4 ಎಂದರೆ ಕ್ಲಬ್ ಬಾರ್. ಸಿಎಲ್ 6a ಎಂದರೆ ಸ್ಟಾರ್ ಹೋಟೆಲ್ ಬಾರ್. ಸಿಎಲ್ 7 ಎಂದರೆ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್. ಸಿಎಲ್ 9 ಎಂದರೆ ಬಾರ್ ಎಂಡ್ ರೆಸ್ಟೋರೆಂಟ್. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಲು ಫೀಸ್ ಕೊಡಬೇಕಾಗುತ್ತದೆ. ಇದರಲ್ಲಿ ಐದು ರೀತಿ ಇರುತ್ತದೆ. 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, ಅದರ್ ಕಾರ್ಪೊರೇಷನ್, ಸಿಎಮ್ಇ, ಟಿಎಂಸಿ, ಕೊನೆಯದಾಗಿ ಅದರ್ಸ್. ಸಿಎಲ್ 1 ಬಾರ್ ಪ್ರಾರಂಭಿಸಬೇಕು ಎಂದರೆ 5,75,000- 7,25,000 ರೂಪಾಯಿಯವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 1 ಪ್ರಾರಂಭಿಸಲು 2006ರವರೆಗೆ ಲೈಸೆನ್ಸ್ ಕೊಟ್ಟಿದ್ದಾರೆ . ಸಿಎಲ್ 2 ಬಾರ್ ಎಂದರೆ ರೀಟೇಲ್ ಶಾಪ್ ಇದನ್ನು ಪ್ರಾರಂಭಿಸಲು 4 ಲಕ್ಷದಿಂದ 5 ಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್4 ಕ್ಲಬ್ ಬಾರ್ ಈ ಬಾರ್ ಪ್ರಾರಂಭಿಸಲು 2016-18ರವರೆಗೆ 5 ಲಕ್ಷದಿಂದ 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗಿತ್ತು. ಸಿಎಲ್ 5 ಎಂದರೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೇಂದಿ ಲೈಸೆನ್ಸ್ ಆಗಿದೆ. ಈ ಲೈಸೆನ್ಸ್ ಪಡೆಯಲು 50 ಸಾವಿರದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 6a ಸ್ಟಾರ್ ಹೊಟೆಲ್ ಲೈಸೆನ್ಸ್ ಪಡೆಯಲು 10 ಲಕ್ಷದಿಂದ ಪ್ರಾರಂಭವಾಗುತ್ತದೆ. ಸಿಎಲ್ 7 ಈ ಲೈಸೆನ್ಸ್ ಪಡೆಯಲು 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 9 ಬಾರ್ ಎಂಡ್ ರೆಸ್ಟೋರೆಂಟ್ ಪ್ರಾರಂಭಿಸಬೇಕಾದರೆ ಲೈಸೆನ್ಸ್ ಪಡೆಯಲು ಪ್ರದೇಶದ ಜನಸಂಖ್ಯೆಯ ಮೇಲೆ ಫೀಸ್ ಇರುತ್ತದೆ. ಕಡಿಮೆಯೆಂದರೂ 7 ಲಕ್ಷ ಇರುತ್ತದೆ. ಕೆಲವು ಲೈಸೆನ್ಸ್ ನ ಫೀಸ್ ಆಯಾ ಪ್ರದೇಶದ ಜನಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ.
ಬಾರ್ ಲೈಸೆನ್ಸ್ ಪಡೆಯಲು ಮೊದಲು ರಾಜ್ಯ ಅಬಕಾರಿ ಇಲಾಖೆ ಅಥವಾ ಜಿಲ್ಲಾ ಅಬಕಾರಿ ಇಲಾಖೆಯ ಭೇಟಿ ನೀಡಿ ಮಾಹಿತಿ ಕೊಡಬೇಕಾಗುತ್ತದೆ. ಯಾವ ಜಾಗದಲ್ಲಿ ಬಾರ್ ಪ್ರಾರಂಭಿಸುತ್ತೇವೆ ಆ ಜಾಗದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಅವರು ಒಪ್ಪಿಕೊಂಡ ನಂತರ ಸ್ವಲ್ಪ ಫೀಸ್ ಕಟ್ಟಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಹಾಕುವಾಗ ಡಿಪಾರ್ಟ್ಮೆಂಟ್ ಸಲಹೆ ಪಡೆದು ಅರ್ಜಿ ಸಲ್ಲಿಸಬೇಕು. ನಂತರ ಪರಿಶೀಲನೆ ಮಾಡುತ್ತಾರೆ, ಪೊಲೀಸ್ ಇಲಾಖೆ ಮೂಲಕ ಸ್ಥಳ ತಪಾಸಣೆ ಮಾಡುತ್ತಾರೆ. ಶುಲ್ಕ ಎಷ್ಟು ತುಂಬಬೇಕು ಎಂಬುದನ್ನು ಹೇಳುತ್ತಾರೆ ಅದರಂತೆ ಶುಲ್ಕ ಪಾವತಿಸಬೇಕು. ಬಾರ್ ಪ್ರಾರಂಭಿಸಲು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಆಧಾರ್ ಕಾರ್ಡ್, ಐಡಿ ಕಾರ್ಡ್, ಅಡ್ರೆಸ್ ಪ್ರೂಫ್ ಗಳನ್ನು ಸಲ್ಲಿಸಬೇಕು. ಬಾಡಿಗೆಗೆ ಶಾಪ್ ತೆಗೆದುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲಾತಿ ಬೇಕಾಗುತ್ತದೆ. ಬಾರ್ ಪ್ರಾರಂಭಿಸುವವರಿಗೆ ಕೆಲವು ಅರ್ಹತೆಗಳಿರಬೇಕು ಅದೇನೆಂದರೆ 21 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಭಾರತೀಯ ಪ್ರಜೆಯಾಗಿರಬೇಕು. ಸರಿಯಾದ ದಾಖಲಾತಿಗಳನ್ನು ಸಲ್ಲಿಸಿದಲ್ಲಿ 10ರಿಂದ 15 ದಿನಗಳೊಳಗೆ ಲೈಸೆನ್ಸ್ ಸಿಗುತ್ತದೆ. 2018 ರ ನಂತರ ಬಾರ್ ಲೈಸೆನ್ಸ್ ಕೊಡುತ್ತಿಲ್ಲ ನಂತರದ ದಿನಗಳಲ್ಲಿ ಕೊಡಬಹುದು. ಒಂದು ಬಾರ್ ಪ್ರಾರಂಭಿಸಲು ಲೈಸೆನ್ಸ್ ಜೊತೆಗೆ ಶಾಪ್ ಎಸ್ಟಾಬ್ಲಿಷ್ಮೆಂಟ್ ಲೈಸೆನ್ಸ್, ಪೋಲಿಸ್ ಹೌಸ್ ಲೈಸೆನ್ಸ್, ಎಪ್ಎಸ್ಎಸ್ಎಐ ಲೈಸನ್ಸ್, ಜಿಎಸ್ಟಿ ಲೈಸೆನ್ಸ್, ಮುನ್ಸಿಪಾಲಿಟಿ ಲೈಸೆನ್ಸ್ ಇರಬೇಕಾಗುತ್ತದೆ. ಈ ಎಲ್ಲಾ ಲೈಸೆನ್ಸ್ ಪಡೆಯಲು 6 ಲಕ್ಷ ರೂಪಾಯಿ ಖರ್ಚಾಗುತ್ತದೆ. ಬಾರ್ ಇಂಟೀರಿಯರ್, ಡಿಸೈನ್, ಕಾರ್ಮಿಕರು ಹೀಗೆ ಒಂದು ಬಾರ್ ಪ್ರಾರಂಭಿಸಲು 50ರಿಂದ 70 ಲಕ್ಷ ಖರ್ಚಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಕೆಜಿಎಫ್ ಚಾಪ್ಟರ್ 2 ಟೀಸರ್ ನ್ನು ಹಿಂದಿಕ್ಕಿದ ಕನ್ನಡ ಟ್ರೇಲರ್ ಯಾವುದು ಗೊತ್ತಾ..??!!
ಯಪ್ಪಾ !! ಚಿತ್ರ ಜಗತ್ತಿನ ನಿರೀಕ್ಷೆಗೂ ಮೀರಿ ಯೂಟ್ಯೂಬ್ ಗೆ ಬಡಿದಪ್ಪಳಿಸಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ನ ಟೀಸರ್ ಬಿಡುಗಡೆಯಾದ ದಿನದಿಂದ ಇಂದಿನವರೆಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಇತ್ತು.
ಈಗ ಕೆಜಿಎಫ್ ಚಾಪ್ಟರ್ 2 ಟೀಸರ್ ನ್ನು ನಂಬರ್ 1 ಟ್ರೆಂಡಿಂಗ್ ಸ್ಥಾನದಿಂದ ಕೆಳಗಿಳಿಸಿ ಕನ್ನಡದ ಮತ್ತೊಂದು ಚಿತ್ರ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ ಸ್ಥಾನದಲ್ಲಿ ಮಿಂಚುತ್ತಿದೆ.
ಹೌದು ರಿಶಭ್ ಶೆಟ್ಟಿ ನಟನೆಯ ವಿಭಿನ್ನ ಸ್ಟೈಲ್ ನಲ್ಲಿ ಮೂಡಿಬಂದಿರೋ ಹೀರೋ ಚಿತ್ರದ ಟ್ರೇಲರ್. ಈಗಾಗಲೇ ಕನ್ನಡ ಪ್ರೇಕ್ಷಕರಿಗೆ ಟ್ರೇಲರ್ ಅತೀವವಾಗಿ ಇಷ್ಟವಾಗಿದ್ದು.
ಚಿತ್ರದ ಸ್ವಾಭಾವಿಕತೆ ವೀಕ್ಷಕರ ಮನವನ್ನು ಗೆದ್ದಿದೆ.
ಅಲ್ಲದೇ ಈ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಇನ್ನೊಂದು ಕನ್ನಡ ಚಿತ್ರವಾದ ಕಬ್ಜಾದ ಮೋಷನ್ ಪೋಸ್ಟರ್ ಕೂಡ 4 ನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ. 5 ನೇ ಸ್ಥಾನದಲ್ಲಿ ಕನ್ನಡ ಚಿತ್ರದ ಹೆಮ್ಮೆ ಕೆಜಿಎಫ್ ಚಾಪ್ಟರ್ 2 ನ ಟೀಸರ್ ಟ್ರೆಂಡಿಂಗ್ ನಲ್ಲಿದ್ದು,150 ಮಿಲಿಯನ್ ವೀಕ್ಷಣೆಯತ್ತ ದೌಡಾಯಿಸುತ್ತಿದೆ.
ಮತ್ತೊಮ್ಮೆ ಹೀರೋ ಚಿತ್ರದ ಟ್ರೇಲರ್ ಮೂಲಕ ರಿಶಭ್ ಶೆಟ್ಟಿ ಕಿಂಗ್ ಆಫ್ ಕಂಟೆಂಟ್ ಅಂತ ಸಾಬೀತು ಮಾಡಿದ್ದಾರೆ.
ಕಬ್ಜಾ ಮಾಡಲು ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್...!!
ಕಿಚ್ಚ ಅಂದ್ರೇನೆ ಒಂತರಾ ಶಕ್ತಿ . ಈಗ ಈ ಶಕ್ತಿ ಏಳು ಭಾಷೆಯಲ್ಲಿ ಬಿಡುಗಡೆ ಆಗ್ತಿರೋ ಒಂದು ಚಿತ್ರಕ್ಕೆ ಶಕ್ತಿ ತುಂಬೋಕೆ ಹೊರಟಿದೆ.
ಹೌದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಬರ್ತಿರೋ ಪ್ಯಾನ್ ಇಂಡಿಯಾ ಚಿತ್ರಕ್ಕೆ ಈಗ ಪ್ಯಾನ್ ಇಂಡಿಯನ್ ಕನ್ನಡ ಸ್ಟಾರ್ ಕಿಚ್ಚ ಸುದೀಪ್ ರವರ ಎಂಟ್ರಿಯಾಗಿದೆ.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರತಂಡ ಸುದೀಪ್ ರವರನ್ನು ಭಾರ್ಗವ್ ಭಕ್ಷಿಯಾಗಿ ಕಬ್ಜಾ ಜಗತ್ತಿನಲ್ಲಿ ಪರಿಚಯಿಸುತ್ತಿದೆ.
ಅವರ ಪಾತ್ರವನ್ನು ಮಾಫಿಯಾ ವನ್ನು ಮುಗಿಸೋ ಜರ್ನಿಗೆ ಭಾರ್ಗವ್ ಭಕ್ಷಿ ಕಾಲಿಡುತ್ತಿದ್ದಾರೆ ಎಂಬ ಸೂಚನೆಯೊಂದಿಗೆ ತೋರಿಸಿದ್ದಾರೆ .
ಕಬ್ಜಾ ಚಿತ್ರತಂಡವಂತೂ ಕಿಚ್ಚ ಸುದೀಪ್ ಆಗಮನದಿಂದ ನೂರಾನೆ ಬಲ ಬಂದಷ್ಟು ಸಂತೋಷಗೊಂಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಯಾಕೆಂದರೆ ಕನ್ನಡದಲ್ಲಿ ಮೊದಲ ನಟ ದೇಶಾದ್ಯಂತ ಇಷ್ಟೊಂದು ಅಭಿಮಾನಿಗಳನ್ನು ಹಾಗೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ನೇಹಿತರನ್ನು ಸಂಪಾದಿಸಿರೋದು ಸುದೀಪ್ ಒಬ್ಬರೇ.
ಹಾಗಾಗಿ ಸುದೀಪ್ ರವರ ಎಂಟ್ರಿ ಖಂಡಿತ ಕಬ್ಜಾ ಚಿತ್ರತಂಡಕ್ಕೆ ಬಲ ತುಂಬಿದೆ .
ಅಲ್ಲದೇ ಮುಕುಂದ ಮುರಾರಿಯ ನಂತರ ಉಪ್ಪಿ ಹಾಗೂ ಕಿಚ್ಚ ಜೋಡಿ ಮತ್ತೆ ಒಂದಾಗುತ್ತಿರುವುದು ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿದೆ.
ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ...
Wednesday 13 January 2021
ಅಭಿಮಾನಿಗಳ ವರ್ತನೆಯಿಂದ ಸಿಟ್ಟಾದ ಡಿಬಾಸ್ ಮಾಡಿದ್ದಾದ್ರೂ ಏನು ಗೊತ್ತಾ..??!!
ಡಿ ಬಾಸ್ ಅಂದಾಕ್ಷಣ ನಮಗೆ ನೆನಪಿಗೆ ಬರೋದು ಅವರ ಮಾಸ್ ಅವತಾರ.
ಅವರು ಲಾಂಗ್ ಕೈಯಲ್ಲಿ ಎತ್ತಿದ್ರು ಅಂದ್ರೆ ಅದೊಂಥರ ಕಿಕ್ ಕೊಡೋ ಸನ್ನಿವೇಶ.
ಕನ್ನಡದ ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳಿಗೆ ಒಬ್ಬನೇ ಅರಸ ಈ ನಮ್ಮ ದಾಸ. ಅಭಿಮಾನಿಗಳನ್ನು ತನ್ನ ಸೆಲಬ್ರೆಟಿಗಳು ಅನ್ನೋ ಬಂಗಾರದ ಮನಸ್ಸಿನ ನಟ.
ಚಂದನವನದ ಮಾಸ್ ಮಹಾರಾಜ ಅಂದ್ರು ತಪ್ಪಾಗಲ್ಲ ಡಿಬಾಸ್ ನ.
ಚಾಲೆಂಜಿಂಗ್ ಸ್ಟಾರ್ ಕೇವಲ ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ತಮ್ಮ ಹೀರೋಗಿರಿಯನ್ನು ತೋರಿಸಿದವರು.
ಅದೇಷ್ಟೋ ನೊಂದವರ ಪಾಲಿಗೆ ಡಿಬಾಸ್ ದಾಸನಾಗಿ ಬಂದು ಸಹಾಯ ಒದಗಿಸಿ ಅದನ್ನು ಎಲ್ಲಿಯೂ ಬಿಟ್ಟುಕೊಡದಂತೆ ಮರೆಯಾಗಿದ್ದು ಇದೆ.
ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯದಂತಹ ಸ್ವಭಾವ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ನದ್ದು.
ಸ್ಯಾಂಡಲ್ ವುಡ್ ನ ನಟರಲ್ಲಿ ಯಾರಾದರೂ ಅರಣ್ಯ ಸಂಪತ್ತಿನ ಬಗ್ಗೆ ಅಥವಾ ಪ್ರಾಣಿಗಳ ಬಗ್ಗೆ ಮನುಷ್ಯರನ್ನು ಮೀರಿದ ಕಾಳಜಿ ವಹಿಸುತ್ತಾರೆಂದರೆ ಅದು ಕೇವಲ ಡಿಬಾಸ್.
ಒಂದು ಪ್ರಾಣಿಯ ಫೋಟೋ ಹಿಡಿಯಲು ಡಿಬಾಸ್ ಬೆಳಗಿನ ಜಾವ ಹೋಗಿ ಅದೆಷ್ಟೋ ಗಂಟೆ ಕಾದಿದ್ದೂ ಇದೆ.
ತಮ್ಮ ಫಾರ್ಮ್ ಹೌಸ್ ನಲ್ಲಿ ಅದೆಷ್ಟೋ ತರಹದ ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ ನಮ್ಮ ದರ್ಶನ್.
ಅಲ್ಲದೇ ಇದೇ ವಿಚಾರದಲ್ಲಿ ಅವರು ಈ ಹಿಂದೆ ಆಫ್ರಿಕಾ ಖಂಡದ ದೇಶಗಳಲ್ಲಿ ಪ್ರವಾಸಕ್ಕೆ ಹೋಗಿದ್ದು ಇದೆ.
ಆದರೆ ಇತ್ತೀಚೆಗಷ್ಟೇ ನಾಗರಹೊಳೆ ಕಾಡಿಗೆ ತೆರಳಿದ್ದಾಗ ಡಿಬಾಸ್ ಕೋಪಕ್ಕೆ ಅವರ ಸೆಲಬ್ರೆಟಿಗಳು ಅಂದರೆ ಫ್ಯಾನ್ಸ್ ತುತ್ತಾದರು.
ಅರಣ್ಯ ವೀಕ್ಷಣೆಗೆ ಬಂದಿದ್ದ ಡಿಬಾಸ್ ರವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದ ಅಭಿಮಾನಿಗಳ ದಂಡು ಗಲಾಟೆ ಮಾಡುತ್ತಿದ್ದುದನ್ನು ನೋಡಿದ ಡಿಬಾಸ್ ತುಸು ಕೋಪದಲ್ಲೇ, ಇಲ್ಲಿ ನಾನು ಸ್ವಲ್ಪ ದಿನ ಇಲ್ಲೇ ಇರುತ್ತೇನೆ. ನೀವು ಗಲಾಟೆ ಮಾಡಿ ಇಲ್ಲಿನ ನಿಯಮಗಳಿಗಾಗಲೀ, ಅಥವಾ ಇಲ್ಲಿನ ಪರಿಸ್ಥಿತಿಯನ್ನಾಗಲಿ ಹಾಳುಮಾಡೋದು ಬೇಡ ಎಂದು ಹೇಳಿದರು. ಇದನ್ನೂ ಕೂಡ ಅವರು ನಯವಾಗೇ ಹೇಳಿದ್ದಾರೆ.
ಡಿಬಾಸ್ ಗೆ ಈ ಘಟನೆ ಸ್ವಲ್ಪ ನೋವು ತಂದಿದ್ದರೂ, ಅವರು ಅಭಿಮಾನಿಗಳಿಗೆ ಸಿಹಿಯನ್ನು ತಂದೇ ತಂದಿರ್ತಾರೆ ಫೋಟೋ ನೀಡೋದರ ಮೂಲಕ .
ಆದರೆ ನಿಯಮದ ಪರಿಪಾಲಕನಾಗಿ ತಮ್ಮ ಸಮಯಪ್ರಜ್ಞೆ ಇಲ್ಲಿ ನಾವು ಮೆಚ್ಚಲೇಬೇಕು.
ಅದಕ್ಕೆ ತಾನೇ ಅವರು ಕರ್ನಾಟಕದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ನಟರಲ್ಲಿ ಒಬ್ಬರಾಗಿರೋದು.
ಈಗಾಗಲೇ ಡಿಬಾಸ್ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬದ ವಿಶೇಷವಾಗಿ ರಾಜ್ಯಾದ್ಯಂತ ಮಾತ್ರವಲ್ಲದೇ ತೆಲುಗಿನಲ್ಲಿಯೂ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಅವರ ಅಭಿಮಾನಿ ಬಳಗ ಈಗಾಗಲೇ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಕಾತರರಾಗಿದ್ದಾರೆ.
ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ