ಕಿಚ್ಚ ಸುದೀಪ್ ಕೇವಲ ಕನ್ನಡ ಮಾತ್ರವಲ್ಲದೆ ದೇಶದ ಯಾವುದೇ ಭಾಷೆಯಲ್ಲೂ ಕೂಡ ಅಲ್ಲಿನ ನಟರೂ ಕೂಡ ನಾಚುವಂತೆ ನಟಿಸೋ ನ್ಯಾಚುರಲ್ ಹಾಗೂ ವರ್ಸಟೈಲ್ ನಟ.
ಕನ್ನಡ ಚಿತ್ರರಂಗದ ಬಾವುಟವನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ಕೂಡ ಗೌರವಯುತ ಸ್ಥಾನದಲ್ಲಿ ನೆಟ್ಟಂತಹ ನಟ . ಇವರ ನಟನೆಯನ್ನು ಲೆಜೆಂಡ್ ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಹಾಗೂ ಕಮಲ್ ಹಾಸನ್ ರವರೇ ಮೆಚ್ಚಿದ್ದರು.
ಆಂದ್ರಪ್ರದೇಶದ ನಟನೆಗೆ ಸನ್ಮಾನಿಸುವ ಉಚ್ಛ ಪ್ರಶಸ್ತಿಯಾದ ನಂದಿ ಅವಾರ್ಡ್ ನ್ನು ನೀಡಿ ಸನ್ಮಾನಿಸಿದ್ದರು. ಟೊರೆಂಟೋ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ , ಹೀಗೆ ಲೆಕ್ಕ ಹಾಕ್ತಾ ಹೋದ್ರೆ ಅವಾರ್ಡ್ ಗಳ ಲಿಸ್ಟ್ ಮುಂದೆ ಹೋಗ್ತಾನೇ ಇರುತ್ತೆ.
ಕಿಚ್ಚ ಅವಾರ್ಡ್ ಗಳಿಂದ ದೂರ ಹೋದರೂ , ಅವಾರ್ಡ್ ಗಳು ಕಿಚ್ಚ ಸುದೀಪ್ ರವರನ್ನು ಹುಡುಕಿಕೊಂಡು ಬರುತ್ತಿದ್ದವು.
ಈಗ ಕಿಚ್ಚ ಸುದೀಪ್ ರವರು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡೋವಂತಹ ಇನ್ನೊಂದು ಕೆಲಸ ಮಾಡಿದ್ದಾರೆ.
ಇಂದಿನಿಂದ ಗೋವಾದಲ್ಲಿ ನಡೆಯಲಿರುವ 51 ನೇ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಆಮಂತ್ರಿತಗೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಗೌರವವನ್ನು ಸ್ವೀಕರಿಸಿದ ಮೊದಲ ಕನ್ನಡ ನಟನಾಗಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಅದಕ್ಕೆ ಅನ್ಸತ್ತೆ ಹೇಳೋದು ಕಿಚ್ಚ ಸುದೀಪ್ ರವರು ಯಾವುದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲಿ ಅಲ್ಲಿಂದ ಪ್ರೀತಿ ಹಾಗೂ ಅಲ್ಲಿ ಕನ್ನಡದ ಕುರಿತಂತೆ ಗೌರವವನ್ನು ಬಿತ್ತಿ ಬರುತ್ತಾರೆ .
No comments:
Post a Comment