ad

Thursday 14 January 2021

ಸಂಕ್ರಾಂತಿ ಹಬ್ಬದಂದು ಹರುಷತಂದ ಕಿಚ್ಚ ಸು "ದೀಪ "....!!

 

 

 


 

                        ಕಿಚ್ಚ ಸುದೀಪ್ ಅಂದಾಗಲೇ ಅದೊಂದು ಪ್ರೀತಿನ ಹಂಚೋ ವ್ಯಕ್ತಿತ್ವ ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತು.

                        ಕಷ್ಟದಲ್ಲಿ ಯಾರೇ ಇರಲಿ ಮೊದಲು ಹೋಗಿ ಅವರ ಕಷ್ಟಕ್ಕೆ ಅವರ ಆತ್ಮೀಯನಂತೆ ಸ್ಪಂದಿಸುವ ಚಿನ್ನದಂತಹ ವ್ಯಕ್ತಿತ್ವದಿಂದಲೇ ತಾನೇ ಇಡೀ ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಅಚ್ಚು ಮೆಚ್ಚಾಗಿರೋದು.

                        ಈಗ ತಮ್ಮ ಚಾರಿಟೇಬಲ್ ಟೃಸ್ಟ್ ನ ಮೂಲಕ ನೊಂದವರ ಹಾಗೂ ನೆರವಿನ ಅಗತ್ಯವಿರುವವರಿಗೆ ಅವರ ಸಮಸ್ಯೆಗಳನ್ನು ಪರಿಹರಿಸೋದರ ಮೂಲಕ ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.

                        ಮಾಣಿಕ್ಯ ಚಿತ್ರದಲ್ಲಿ ಅವರ ಒಂದು ಡೈಲಾಗ್ " ಪ್ರೀತಿನಾ ಹಂಚಿಕೋ " ಅಂತ ಅದನ್ನು ನಿಜಜೀವನದಲ್ಲಿ ಕೂಡ ಪರಿಪಾಲಿಸೋ ನಟ ಕಿಚ್ಚ ಸುದೀಪ್.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮ್ಮ ಆಪ್ತರಾದ ಕಿರಣ್ ರವರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಉಡುಗೊರೆಯಾಗಿ ನೀಡೋದರ ಮೂಲಕ ಅವರ ಹಬ್ಬದ ದಿನವನ್ನು ಮತ್ತಷ್ಟು ಸಂತೋಷಗೊಳಿಸುವಲ್ಲಿ ಕಾರಣರಾದರು.

                    ಇದೇ ತರಹ ಅದೆಷ್ಟೋ ಜನರ ಜೀವನದಲ್ಲಿ ಬೆಳಕಾಗಿ ಅವರ ಮುಖದ ನಗುವಾಗಿ ಇರೋದಕ್ಕೆ ತಾನೇ   ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು " ಅಭಿಮಾನಿಗಳ ಅಭಿಮಾನಿ " ಅಂತ ಕರೆಯೋದು.

ತಮ್ಮ ಆದಾಯ 40ಕ್ಕೂ ಅಧಿಕ ಭಾಗವನ್ನು ಸಾಮಾಜಿಕ ಸೇವೆಗಳಿಗಾಗಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕನ್ನಡ ಚಿತ್ರರಂಗ ಇಂತಹ ಮನೋಜ್ಞ ನಟನನ್ನು ಹೊಂದಿರುವುದಕ್ಕೆ ಧನ್ಯವಾದರೆ, ಕನ್ನಡ ನಾಡು ಇಂತಹ ಕೊಡುಗೈ ದಾನಿಯನ್ನು ಪಡೆಯಲು ಧನ್ಯವಾಗಿದೆ .

ಇವರ ಈ ವ್ಯಕ್ತಿತ್ವ ಉಳಿದ ನಟರಿಗೂ ಮಾದರಿಯಾಗಲೀ ಎನ್ನುವುದು ನಮ್ಮ ಆಶಯ.

No comments:

Post a Comment