ad

Wednesday 13 January 2021

ಅಭಿಮಾನಿಗಳ ವರ್ತನೆಯಿಂದ ಸಿಟ್ಟಾದ ಡಿಬಾಸ್ ಮಾಡಿದ್ದಾದ್ರೂ ಏನು ಗೊತ್ತಾ..??!!

 


 

                ಡಿ ಬಾಸ್ ಅಂದಾಕ್ಷಣ ನಮಗೆ ನೆನಪಿಗೆ ಬರೋದು ಅವರ ಮಾಸ್ ಅವತಾರ.
ಅವರು ಲಾಂಗ್ ಕೈಯಲ್ಲಿ ಎತ್ತಿದ್ರು ಅಂದ್ರೆ ಅದೊಂಥರ ಕಿಕ್ ಕೊಡೋ ಸನ್ನಿವೇಶ.
ಕನ್ನಡದ ಅದೆಷ್ಟೋ ಕೋಟ್ಯಾಂತರ ಅಭಿಮಾನಿಗಳಿಗೆ ಒಬ್ಬನೇ ಅರಸ ಈ ನಮ್ಮ ದಾಸ. ಅಭಿಮಾನಿಗಳನ್ನು ತನ್ನ ಸೆಲಬ್ರೆಟಿಗಳು ಅನ್ನೋ ಬಂಗಾರದ ಮನಸ್ಸಿನ ನಟ.
ಚಂದನವನದ ಮಾಸ್ ಮಹಾರಾಜ ಅಂದ್ರು ತಪ್ಪಾಗಲ್ಲ ಡಿಬಾಸ್ ನ.

ಚಾಲೆಂಜಿಂಗ್ ಸ್ಟಾರ್ ಕೇವಲ ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ಸ್ಕ್ರೀನ್ ನಲ್ಲೂ ತಮ್ಮ ಹೀರೋಗಿರಿಯನ್ನು ತೋರಿಸಿದವರು.

ಅದೇಷ್ಟೋ ನೊಂದವರ ಪಾಲಿಗೆ ಡಿಬಾಸ್ ದಾಸನಾಗಿ ಬಂದು ಸಹಾಯ ಒದಗಿಸಿ ಅದನ್ನು ಎಲ್ಲಿಯೂ ಬಿಟ್ಟುಕೊಡದಂತೆ ಮರೆಯಾಗಿದ್ದು ಇದೆ.
ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೂ ತಿಳಿಯದಂತಹ ಸ್ವಭಾವ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ನದ್ದು.

ಸ್ಯಾಂಡಲ್ ವುಡ್ ನ ನಟರಲ್ಲಿ ಯಾರಾದರೂ ಅರಣ್ಯ ಸಂಪತ್ತಿನ ಬಗ್ಗೆ ಅಥವಾ ಪ್ರಾಣಿಗಳ ಬಗ್ಗೆ ಮನುಷ್ಯರನ್ನು ಮೀರಿದ ಕಾಳಜಿ ವಹಿಸುತ್ತಾರೆಂದರೆ ಅದು ಕೇವಲ ಡಿಬಾಸ್.

ಒಂದು ಪ್ರಾಣಿಯ ಫೋಟೋ ಹಿಡಿಯಲು ಡಿಬಾಸ್ ಬೆಳಗಿನ ಜಾವ ಹೋಗಿ ಅದೆಷ್ಟೋ ಗಂಟೆ ಕಾದಿದ್ದೂ ಇದೆ.
ತಮ್ಮ ಫಾರ್ಮ್ ಹೌಸ್ ನಲ್ಲಿ ಅದೆಷ್ಟೋ ತರಹದ ಪ್ರಾಣಿಗಳನ್ನು ಸಾಕಿಕೊಂಡಿದ್ದಾರೆ ನಮ್ಮ ದರ್ಶನ್.
ಅಲ್ಲದೇ ಇದೇ ವಿಚಾರದಲ್ಲಿ ಅವರು ಈ ಹಿಂದೆ ಆಫ್ರಿಕಾ ಖಂಡದ ದೇಶಗಳಲ್ಲಿ ಪ್ರವಾಸಕ್ಕೆ ಹೋಗಿದ್ದು ಇದೆ.
ಆದರೆ ಇತ್ತೀಚೆಗಷ್ಟೇ ನಾಗರಹೊಳೆ ಕಾಡಿಗೆ ತೆರಳಿದ್ದಾಗ ಡಿಬಾಸ್ ಕೋಪಕ್ಕೆ ಅವರ ಸೆಲಬ್ರೆಟಿಗಳು ಅಂದರೆ ಫ್ಯಾನ್ಸ್ ತುತ್ತಾದರು.

ಅರಣ್ಯ ವೀಕ್ಷಣೆಗೆ ಬಂದಿದ್ದ ಡಿಬಾಸ್ ರವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದ ಅಭಿಮಾನಿಗಳ ದಂಡು ಗಲಾಟೆ ಮಾಡುತ್ತಿದ್ದುದನ್ನು ನೋಡಿದ ಡಿಬಾಸ್ ತುಸು ಕೋಪದಲ್ಲೇ, ಇಲ್ಲಿ ನಾನು ಸ್ವಲ್ಪ ದಿನ ಇಲ್ಲೇ ಇರುತ್ತೇನೆ. ನೀವು ಗಲಾಟೆ ಮಾಡಿ ಇಲ್ಲಿನ ನಿಯಮಗಳಿಗಾಗಲೀ, ಅಥವಾ ಇಲ್ಲಿನ ಪರಿಸ್ಥಿತಿಯನ್ನಾಗಲಿ ಹಾಳುಮಾಡೋದು ಬೇಡ ಎಂದು ಹೇಳಿದರು. ಇದನ್ನೂ ಕೂಡ ಅವರು ನಯವಾಗೇ ಹೇಳಿದ್ದಾರೆ.
ಡಿಬಾಸ್ ಗೆ ಈ ಘಟನೆ ಸ್ವಲ್ಪ ನೋವು ತಂದಿದ್ದರೂ,  ಅವರು ಅಭಿಮಾನಿಗಳಿಗೆ ಸಿಹಿಯನ್ನು ತಂದೇ ತಂದಿರ್ತಾರೆ ಫೋಟೋ ನೀಡೋದರ ಮೂಲಕ .

ಆದರೆ ನಿಯಮದ ಪರಿಪಾಲಕನಾಗಿ ತಮ್ಮ ಸಮಯಪ್ರಜ್ಞೆ ಇಲ್ಲಿ ನಾವು ಮೆಚ್ಚಲೇಬೇಕು.
ಅದಕ್ಕೆ ತಾನೇ ಅವರು ಕರ್ನಾಟಕದ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರೋ ನಟರಲ್ಲಿ ಒಬ್ಬರಾಗಿರೋದು.
ಈಗಾಗಲೇ ಡಿಬಾಸ್ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬದ ವಿಶೇಷವಾಗಿ ರಾಜ್ಯಾದ್ಯಂತ ಮಾತ್ರವಲ್ಲದೇ ತೆಲುಗಿನಲ್ಲಿಯೂ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಅವರ ಅಭಿಮಾನಿ ಬಳಗ ಈಗಾಗಲೇ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಕಾತರರಾಗಿದ್ದಾರೆ.

ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ

No comments:

Post a Comment