ad

Thursday 14 January 2021

ಕಬ್ಜಾ ಮಾಡಲು ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್...!!

 

 

 


 

                ಕಿಚ್ಚ ಅಂದ್ರೇನೆ ಒಂತರಾ ಶಕ್ತಿ . ಈಗ ಈ ಶಕ್ತಿ ಏಳು ಭಾಷೆಯಲ್ಲಿ ಬಿಡುಗಡೆ ಆಗ್ತಿರೋ ಒಂದು ಚಿತ್ರಕ್ಕೆ ಶಕ್ತಿ ತುಂಬೋಕೆ ಹೊರಟಿದೆ.
ಹೌದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ ನಲ್ಲಿ ಬರ್ತಿರೋ ಪ್ಯಾನ್ ಇಂಡಿಯಾ ಚಿತ್ರಕ್ಕೆ ಈಗ ಪ್ಯಾನ್ ಇಂಡಿಯನ್ ಕನ್ನಡ ಸ್ಟಾರ್ ಕಿಚ್ಚ ಸುದೀಪ್ ರವರ ಎಂಟ್ರಿಯಾಗಿದೆ.
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರತಂಡ ಸುದೀಪ್ ರವರನ್ನು ಭಾರ್ಗವ್ ಭಕ್ಷಿಯಾಗಿ ಕಬ್ಜಾ ಜಗತ್ತಿನಲ್ಲಿ ಪರಿಚಯಿಸುತ್ತಿದೆ.



 

                            ಅವರ ಪಾತ್ರವನ್ನು ಮಾಫಿಯಾ ವನ್ನು ಮುಗಿಸೋ ಜರ್ನಿಗೆ ಭಾರ್ಗವ್ ಭಕ್ಷಿ ಕಾಲಿಡುತ್ತಿದ್ದಾರೆ ಎಂಬ ಸೂಚನೆಯೊಂದಿಗೆ ತೋರಿಸಿದ್ದಾರೆ .


   



                            ಕಬ್ಜಾ ಚಿತ್ರತಂಡವಂತೂ ಕಿಚ್ಚ ಸುದೀಪ್ ಆಗಮನದಿಂದ ನೂರಾನೆ ಬಲ ಬಂದಷ್ಟು ಸಂತೋಷಗೊಂಡಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಯಾಕೆಂದರೆ ಕನ್ನಡದಲ್ಲಿ ಮೊದಲ ನಟ ದೇಶಾದ್ಯಂತ ಇಷ್ಟೊಂದು ಅಭಿಮಾನಿಗಳನ್ನು ಹಾಗೂ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ನೇಹಿತರನ್ನು ಸಂಪಾದಿಸಿರೋದು ಸುದೀಪ್ ಒಬ್ಬರೇ.
ಹಾಗಾಗಿ ಸುದೀಪ್ ರವರ ಎಂಟ್ರಿ ಖಂಡಿತ ಕಬ್ಜಾ ಚಿತ್ರತಂಡಕ್ಕೆ ಬಲ ತುಂಬಿದೆ .
ಅಲ್ಲದೇ ಮುಕುಂದ ಮುರಾರಿಯ ನಂತರ ಉಪ್ಪಿ ಹಾಗೂ ಕಿಚ್ಚ ಜೋಡಿ ಮತ್ತೆ ಒಂದಾಗುತ್ತಿರುವುದು ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿದೆ.

 

 ಇದೇ ತರಹದ ತಾಜಾಸುದ್ದಿಗಳಿಗಾಗಿ ನಮ್ಮ ಬ್ಲಾಗ್ ಗೆ ಸಬ್ಸ್ಕ್ರೈಬ್ ಆಗಿ...

No comments:

Post a Comment