ad

Tuesday 26 January 2021

ಬುರ್ಜ್ ಖಲೀಫಾಗೆ ಹೊರಟ ಬಾದ್ ಶಾ..!!

ವಿಕ್ರಾಂತ್ ರೋಣ ದೇಶದಾದ್ಯಂತ ಸುದ್ಧಿಯಲ್ಲಿದ್ದಾನೆ.
ಖಡಕ್ ಪೋಲಿಸ್ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೂ ಈಗ ಅಭಿನಯ ಚಕ್ರವರ್ತಿ ಹಾಗೂ ಅನೂಪ್ ಭಂಡಾರಿ ಯವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರೋ ವಿಕ್ರಾಂತ್ ರೋಣ ಕೇವಲ ಕನ್ನಡ ಹಾಗೂ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ, ಇಡೀ ದೇಶಾದ್ಯಂತ ಬಹುಬೇಡಿಕೆಯ ಚಿತ್ರವಾಗಿದೆ.

ಇದೇ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಟೈಟಲ್ ಹಾಗೂ ಸ್ನೀಕ್ ಪೀಕ್ ಬಿಡುಗಡೆ ಮಾಡಿದಂತಹ ಪ್ರಪಂಚದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ.

ಸ್ವತಃ ಕಿಚ್ಚ ಸುದೀಪ್ ರವರೇ ಹೇಳುವಂತೆ ನಿರ್ಮಾಪಕ ಹಾಗೂ ಅವರ ಸ್ನೇಹಿತರಾದ ಜಾಕ್ ಮಂಜುನಾಥ್ ರವರ ದೃಢ ನಿರ್ಧಾರ ಚಿತ್ರ ಈ ಮಟ್ಟಕ್ಕೆ  ಬರುವಲ್ಲಿ ಮುಖ್ಯ ಕಾರಣ ಎಂದಿದ್ದಾರೆ.

ಬುರ್ಜ್ ಖಲೀಫಾದಲ್ಲಿ ಕಾರ್ಯಕ್ರಮ ನಡೆಯಲು 5 ದಿನಗಳು ಬಾಕಿ ಇರುವಂತೆಯೇ ಕಿಚ್ಚ ಸುದೀಪ್ ರವರು ತಂಡದೊಂದಿಗೆ ದುಬೈಗೆ ಹೊರಟಿದ್ದಾರೆ.
 
 

ಜನವರಿ 31 ರಂದು ಕನ್ನಡದ ಹೆಮ್ಮೆ ಜಗತ್ತಿನಲ್ಲೇ ಅತ್ಯಂತ ಎತ್ತರದ ಕಟ್ಟಡದ ಮೇಲೆ ಅನಾವರಣಗೊಳ್ಳುವುದನ್ನು ನೋಡಲು ಕೋಟ್ಯಂತರ ಜನರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

No comments:

Post a Comment