ಕಿಚ್ಚ ಸುದೀಪ್ ಎಂದರೆ ಕನ್ನಡದ ಅಸ್ಮಿತೆ. ಕನ್ನಡದ ಆಸ್ತಿ ಎಂದರೆ ತಪ್ಪಾಗಲಾರದು.
ಅವರು ಎಲ್ಲೇ ಹೋಗಲಿ ಕನ್ನಡ ಹಾಗೂ ಕನ್ನಡ ಸಂಸ್ಕೃತಿಯ ಬಾವುಟವನ್ನು ತಾವು ಹೋಗುವ ಸ್ಥಳಗಳಲ್ಲಿ ನೆಟ್ಟು ಕನ್ನಡಕ್ಕಾಗಿ ಪ್ರೀತಿ ಹಾಗೂ ಗೌರವಗಳನ್ನು ಸಂಪಾದಿಸಿಕೊಂಡು ಬರುತ್ತಾರೆ ಇದು ಅವರನ್ನು ಮೆಚ್ಚಲೇಬೇಕು ಎನ್ನುವಂತೆ ಮಾಡುತ್ತೆ.
51 ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಮುಖ್ಯ ಅತಿಥಿಯಾಗಿ ಹೋದ ಕಿಚ್ಚ ಸುದೀಪ್ ಭಾಷಣ ಮಾಡೋ ಸಂದರ್ಭದಲ್ಲಿ ಮೊದಲು ಕನ್ನಡದಲ್ಲಿ ಪ್ರಾರಂಭಿಸಿ ಕನ್ನಡತನವನ್ನು ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೂಡ ಪಸರಿಸಿ ಎಲ್ಲಾ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಉಪಸ್ಥಿತರಿದ್ದರು.
ಫ್ಯಾಂಟಮ್ ಚಿತ್ರ ಈಗಾಗಲೇ ಬಹುಭಾಷೆಗಳಲ್ಲಿ ತಯಾರಾಗುತ್ತಿದ್ದು, ಕನ್ನಡ ಚಿತ್ರರಂಗದ ಹೆಗ್ಗುರುತಾಗಿ ರಾಷ್ಟ್ರಾದ್ಯಂತ ಸಂಚರಿಸಲು ಇನ್ನೇನು ಸಜ್ಜಾಗಿದೆ.
ಕಿಚ್ಚ ಸುದೀಪ್ ರವರ ಕನ್ನಡ ಪ್ರೇಮದಿಂದಾಗೀನೆ ಇಂದು ಅವರು ಎಲ್ಲೇ ಹೋಗಲಿ ಕನ್ನಡದ ಅರಿವನ್ನು ಹಾಗೂ ಕನ್ನಡ ಸಂಸ್ಕೃತಿಯನ್ನು ಪರಭಾಷಿಗರಿಗೆ ಪರಿಚಯಿಸಿ ಕನ್ನಡದ ಬಗೆಗಿನ ಪರಿಚಯವನ್ನು ದೇಶಾದ್ಯಂತ ವಿಸ್ತಾರವಾಗಿ ಹರಡಿದ್ದಾರೆ.
ನೀವು ಪರಭಾಷಿಗರಿಗೆ ಕನ್ನಡ ಅಥವಾ ಕರ್ನಾಟಕದ ಬಗ್ಗೆ ಕೇಳಿದಾಗ ಮೊದಲು ಅವರು ಹೇಳುವ ಹೆಸರು ಕಿಚ್ಚ ಎಂದೇ.
ಅದು ಕಿಚ್ಚ ಸುದೀಪ್ ರವರು ಸಂಪಾದಿಸಿರುವ ಪ್ರೀತಿ ಗೌರವ.
ತಾವು ಬೆಳೆಯೋದರ ಜೊತೆಗೆ ಕನ್ನಡದ ಕೀರ್ತಿಯನ್ನು ಸಹ ಕಿಚ್ಚ ಸುದೀಪ್ ಉಚ್ಚ ಶ್ರೇಣಿಗೆ ಕರೆದೊಯ್ಯುತ್ತಿದ್ದಾರೆ.
No comments:
Post a Comment